Posted by admin on 2023-05-14 20:47:56 |
Share: Facebook | Twitter | Whatsapp | Linkedin
ಹಿರಿಯೂರು: 2023 ರ ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಅಂತಿಮವಾಗಿ ಹೊರಬಿದ್ದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಐಎನ್ಸಿಯ(INC) ಜೈನ ಸಮುದಾಯದ ಅಭ್ಯರ್ಥಿ ಡಿ.ಸುಧಾಕರ್ 92000 ಮತಗಳಿಂದ ಗೆದ್ದಿದ್ದಾರೆ. ಬಿಜೆಪಿಯ ಕೆ.ಪೂರ್ಣಿಮಾ ಶ್ರೀನಿವಾಸ್ 62000 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಜೆಡಿಎಸ್ನ ರವೀಂದ್ರಪ್ಪ ಮೂರನೇ ಸ್ಥಾನದಲ್ಲಿದ್ದರು.
ಇದಲ್ಲದೆ ಶ್ರೀಯುತರು DCC ಬ್ಯಾಂಕ್ ಚಿತ್ರದುರ್ಗದ ಅಧ್ಯಕ್ಷರಾಗಿಯೂ, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಅಧ್ಯಕ್ಷರಾಗಿಯೂ ಮತ್ತು ಹೊಯ್ಸಳ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿಯೂ ಸೇವೆ ಸಲ್ಲುಸುತಿದ್ದಾರೆ.
ಪಾರ್ಶ್ವನಾಥ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷರು ಕೂಡ ಆಗಿರುವ ಡಿ.ಸುಧಾಕರ್ ಅವರು ಪುರಾತನ ಮಂದಿರಗಳ ಜೀರ್ಣೋದ್ಧಾರ ಕಾರ್ಯಕ್ರಮಗಳು, ನೇತ್ರದಾನ ಹಾಗು ಆರೋಗ್ಯ ತಪಾಸಣೆ ಕಾರ್ಯಕ್ರಮಗಳು ಜೊತೆಗೆ ಹಲವಾರು ಜನಪ್ರಯೋಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ.