Posted by admin on 2023-05-19 19:49:10 |
Share: Facebook | Twitter | Whatsapp | Linkedin
ಶಿವಮೊಗ್ಗ ಜಿಲ್ಲೆಯ ದ್ಯಾವಿನಕೆರೆ ಗ್ರಾಮದ ರೈತ ಉಮೇಶ ಅವರ ಜಮೀನಿನಲ್ಲಿ ಮಣ್ಣು ಅಗೆಯುವಾಗ ಸುಮಾರು 10 ನೇ ಶತಮಾನದ್ದು ಎನ್ನಲಾಗುವಾ ಪಾರ್ಶ್ವನಾಥ ತೀರ್ಥಂಕರ ಮೂರ್ತಿ ಪತ್ತೆಯಾಗಿದೆ.
ಉಮೇಶ ಅವರು ಜಮೀನಿನಲ್ಲಿ ಜೆಸಿಬಿಯಿಂದ ಮಣ್ಣೆತ್ತುವಾಗ ಈ ಮೂರ್ತಿ ದೊರಕಿದೆ. ಮೂರ್ತಿಯು 2.4 ಅಡಿ ಎತ್ತರ, 1.4 ಅಗಲ ಇದೆ. ಮೂರ್ತಿಯ ಪೀಠವು ಎರಡು ಅಡಿ ಅಗಲವಿದೆ. ಈ ಪೀಠದಲ್ಲಿ ಜಿನಮೂರ್ತಿಯ ಕುರಿತು ಧರ್ಮಪಾಲನೆಯಲ್ಲಿ, ದ್ರವಿಳಸಂಗ, ನಂದಿಸಂಗ ಆರುಗಳನ್ವಯದ ಅನುಯಾಯಿ, ಭಕ್ತ ಸನ್ನತಿ ದೇವನು ತಾನು ಕೈಗೊಂಡ ಉಪವಾಸದ ವ್ರತದ ನೆನಪಿಗೆ ಈ ಮೂರ್ತಿಯನ್ನು ಮಾಡಿಸದನೆಂದು ಊಲ್ಲೇಖಿಸಲಾಗಿದೆ.
ಶಿವಮೊಗ್ಗದ ಹಲವು ಭಾಗಗಳಲ್ಲಿ ಜೈನ ಧರ್ಮದ ಕುರುಹುಗಳನ್ನು ಕಾಣಬಹುದು. ಕಲ್ಲೂರು ಮಂಡಳಿ (ಗಂಗರು), ಕಾಶೀಪುರ, ಗುಡ್ಡೇಕಲ್ಲು, ಲಕ್ಕವಳ್ಳಿ, ಮಾವಲಗೊಪ್ಪ, ಸಾಗರ, ಹೊಸನಗರ, ತೀರ್ಥಹಳ್ಳಿ ಮುಂತಾದ ಭಾಗಗಳಲ್ಲಿ ಜೈನರ ಪ್ರಮುಖ ಧಾರ್ಮಿಕ ಕೇಂದ್ರಗಳಿದ್ದವು.
(ಮೂಲ : ಪ್ರಜಾವಾಣಿ)