Posted by admin on 2023-05-26 11:12:41 |
Share: Facebook | Twitter | Whatsapp | Linkedin
ವಾಪಿ : ದಿನಾಂಕ 26-5-2023 ರಂದು ರಸ್ತೆ ಅಪಘಾತದಲ್ಲಿ ಅಚಲಗಚ್ಚದ ಯುವ ಕ್ಷುಲ್ಲಕ ಜೈನ ಮುನಿಯಾದ ಪೂಜ್ಯ ಮೇಘ ರಕ್ಷಿತ ಸಾಗರ ಮಹಾರಾಜರ ನಿಧನವಾಗಿದೆ. ಗುಜರಾತನ ವಾಪಿ ಮತ್ತು ಭೀಲಡ್ ಪ್ರದೇಶದ ಮಧ್ಯೆ ವಿಹಾರದಲ್ಲಿದ್ದಾಗ ಈ ದುರ್ಘಟನೆಯು ನಡೆದಿದೆ.
ಮೂಲತಃ ಗುಜರಾತಿನ ಗಡಶಿಶಾ ಗ್ರಾಮದವರಾದ ರಕ್ಷಿತ ಸಾಗರ ಮಹಾರಾಜರ ದೀಕ್ಷೆಯು ಮುಂಬೈನ ಘಾಟಕೋಪರನಲ್ಲಿ ದೇವರತ್ನ ಸಾಗರ ಮಹಾರಾಜರ ನೇತೃತ್ವದಲ್ಲಿ ನೆರವೇರಿತ್ತು. ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಜೈನ ಸಮುದಾಯವು ಶೋಕದಲ್ಲಿ ಮುಳುಗಿದೆ.