Posted by admin on 2023-05-27 05:46:56 |
Share: Facebook | Twitter | Whatsapp | Linkedin
ಜಬಲಪುರ: ಆರ್ಯಿಕ ಶ್ರೀ ಅನುನಯ ಮತಿ ಮಾತಾ ಜೀ ಅವರ ಸಲೇಖನ ಪೂರ್ಣ ಸಮಾಧಿ ಮರಣವು ಮೇ 24, 2023 ರ ಮದ್ಯಾಹ್ನ 3:00 ಗಂಟೆಗೆ ಜಬಲಪುರದ ದಯೋದಯ ತೀರ್ಥದಲ್ಲಿ ಸಮಾಪ್ತವಾಯಿತು.
ಆರೋಗ್ಯ ಸಮಸ್ಯೆಯಂತಹ ಸೂಕ್ಷ್ಮ ಸ್ಥಿತಿಯ ನಡುವೆಯೂ, ರೋಗದ ವಿರುದ್ಧ ಹೋರಾಡಿ, ಉತ್ತಮ ನಡವಳಿಕೆಯನ್ನು ಅನುಸರಿಸಿ, ನಗುಮೊಗದಿಂದಲೇ ಮೃತ್ಯುಂಮಹೋತ್ಸವವನ್ನು ಮಾತಾ ಜಿ ಅವರು ಆಚರಿಸಿದ್ದರು. ಅನುನಯ ಮಾತಾಜಿ ಅವರು ಶ್ರೀ ವಿದ್ಯಾಸಾಗರ ಜೀ ಮಹಾರಾಜರ ಪರಮ ಶಿಷ್ಯರಾದ ವಂದನೀಯ ಆರ್ಯಿಕ ಶ್ರೀ ಆದರ್ಶಮತಿ ಮಾತಾ ಅವರ ಸಂಘದ ಸದಸ್ಯರಾಗಿದ್ದರು.
ತುಂಬಾ ಗಂಭೀರ ಸ್ಥಿತಿಯಲ್ಲಿದ್ದರೂ ಸಹ, ಮಾತಾಜೀಯವರು ತಮ್ಮ ಮಹಾವ್ರತವನ್ನು ಬಿಟ್ಟಿರಲಿಲ್ಲ ಮತ್ತು ಅಂತಹ ಭಯಾನಕ ರೋಗವನ್ನು ಸಹಿಸಿಕೊಳ್ಳುತ್ತಲೇ ಇದ್ದರು. ಗುರುವಿನ ಅಪ್ಪಣೆಯನ್ನು ಧ್ಯೇಯವಾಗಿ ಪಾಲಿಸಿ ಪೂರ್ಣ ಪ್ರಜ್ಞೆಯಿಂದ ಸಲ್ಲೇಖನವನ್ನು ಧರಿಸಿ ಈ ನಶ್ವರ ದೇಹವನ್ನು ತೊರೆದರು.