Posted by admin on 2023-05-22 20:43:02 |
Share: Facebook | Twitter | Whatsapp | Linkedin
ನವದೆಹಲಿ: ಪರಮ ಪೂಜ್ಯ ಪಾಕೃತಚಾರ್ಯ ಶ್ರೀ 108 ಸುನಿಲ ಸಾಗರ ಮಹಾರಾಜರ ಪರಮ ಶಿಷ್ಯರಾದಂತಹ ಮುನಿ ಶ್ರೀ 108 ಸಮತ್ವ ಸಾಗರ ಮಹಾರಾಜರ ಸಲ್ಲೇಕನಪೂರ್ಣ ಸಮಾಧಿಮರಣವು ದಿನಾಂಕ 21 ಮೇ 2023 ರ ಮಧ್ಯಾಹ್ನ 12:34 ಕ್ಕೆ ದಿಲ್ಲಿಯ ಜಾಗೃತಿ ಏನ್ಕ್ಲಿವ್ ನಲ್ಲಿ ಸಮಾಪ್ತವಾಯಿತು.
16 ನೇ ತೀರ್ಥಂಕರರಾದ ಶಾಂತಿನಾಥ ಭಗವಾನರ ಜನ್ಮ ದಿನವಾದ ಮೇ 18, 2023 ರ ಶುಭದಿನದಂದು ಕ್ಷುಲ್ಲಕ ಮುನಿ ಸಮತ್ವ ಸಾಗರ ಮಹಾರಾಜರಿಗೆ ಆಚಾರ್ಯ ಶ್ರೀ ಸುನಿಲ ಸಾಗರರವರು ಮುನಿ ದೀಕ್ಷೆಯನ್ನು ನೀಡಿದ್ದರು.
ಈ ಶುಭದಿನದಂದು ಹಲವಾರು ಜೈನ ಮುನಿಗಳು ಉಪವಾಸವನ್ನು ಕೈಗೊಂಡಿದ್ದರು. ಇದೆ ಸಂದರ್ಭದಲ್ಲಿ ಐದು ಮುನಿಗಳ ಕೇಶಲೋಚನ ಕಾರ್ಯಕ್ರಮವು ನೆರವೇರಿತ್ತು.